Tuesday, February 16, 2010

ಮನುಜ

ಹುಟ್ಟಿದವರು ಸಾಯಲೇ ಬೇಕು ಅದು ಸಹಜ
ಉದ್ದರಿಸೋ ನಿನ್ನ ದೇಶ , ನೀ ಬೆಳಿದ ಸಮಾಜ
ವಿಧಿ ಲಿಖಿತ ಸಾಯಲೇ ಬೇಕು ಎಲ್ಲರು ಅದೂ ನಿಜ
ತಿಳಿದು ತಿಳಿದು ಮಾಡುವೆ ಯಾಕೆ ಅನ್ಯಾಯ ನೀ ಮನುಜ

Sunday, February 7, 2010

ಕೋಪ

ದೇಹ ದೂರ ಆಗಬಹುದು ಪ್ರೀತಿ ಅಲ್ಲ ಗೆಳತಿ
ಯಾಕೆ ದೂರ ಹೋದೆ, ಕಂಡ ಕನಸು ಮರೆತೆ
ಹೊಸ ವರುಷದ ಅರುಣೋದಯಕ್ಕೆ ಆಗು ನನ್ನ ಬಾಳ ದೀಪ
ಯಾಕೆ ಸುಮ್ಮನೆ ನನ್ನ ಮೇಲೆ ಹಳೆ ವರುಷದ ಕೋಪ

Saturday, February 6, 2010

ಪ್ರಕೃತಿ

ನಮ್ಮ ಸುತ್ತ ಇದೆ ಸುಂದರ ಹಸಿರು ಪ್ರಕೃತಿ
ಇದು ರವಿವರ್ಮನ ಸುಂದರ ಕಲಾಕೃತಿ
ಬೆಳಿಸಿ ಉಳಿಸಲು ಬೇಕು ವರ್ಷಂಪ್ರತಿ
ಕಡಿದು ಕೆಡವಲು ಸಾಕು ಒಂದು ಕತ್ತಿ

Friday, February 5, 2010

ನಿರಂತರ

ಬರಿದಾದ ಬಾಳಲ್ಲಿ ನಿ ಬರೆದೆ ಪ್ರೇಮದ ಮೊದಲ ಅಕ್ಷರ
ದಾರಿ ಕಾಣದ ಬದುಕ ಪ್ರಶ್ನೆಗೆ ಕೊಟ್ಟೆ ನೀನು ಉತ್ತರ
ಪ್ರೀತಿ ಚಿರಾಯು ಇರಲಿ ಹೀಗೆ ಎಂದೆ ಬಂಗಾರ
ಜೀವನದ ಜಂಜಾಟದಲ್ಲಿ, ಮರೆತೆ ನಿನ್ನ ಕ್ಷಮಿಸು ನಿರಂತರ

ಯುಗಾದಿ

ಮರೆಯದಿರು ನೀ ನಡೆದ ಹಾದಿ
ಅಗಲಿ ಬರದಂತೆ ಹಣೆಬರಹ ವಿಧಿ
ಹಠ ಛಲದಿಂದ ಜಯವ ನೀ ಕದಿ
ಬಾಳಲಿ ಬರಲಿ ಪ್ರತಿ ದಿನ ಯುಗಾದಿ

Thursday, February 4, 2010

ಗೆಳತಿ

ಗೆಳತಿ ನಂಗೆ ನಿನ್ನದೆ ಚಿಂತೆ
ಬೇಕಿಲ್ಲ ನಿನ್ನ ರೂಪ, ನೋಟುಗಳ ಕಂತೆ
ನಿನ್ನ ಪ್ರೀತಿ, ನಂಬಿಕೆ ಸದಾ ರಕ್ಷೆ
ನೀಡು ಒಹ್ ದೇವ ನನಗೆ ಅವಳನೇ ಬಿಕ್ಷೆ