Monday, March 26, 2012

ವ್ಯಕ್ತಿತ್ವದ ಫಿರಂಗಿಯ ಮುಂದೆ ಪುಡಿಯಾದ ಭದ್ರ ಕೋಟೆ

ಉಡುಪಿ - ಚಿಕ್ಕಮಗಳೂರು ಬಿಜೆಪಿಯ ಭದ್ರ ಕೋಟೆ ಎಂದರೆ ತಪ್ಪಿಲ್ಲ, ಬೇರೆ ಯಾರೇ ಕಾಂಗ್ರೆಸ್ನಿಂದ ನಿಂತಿದ್ದರೆ ಗೆಲುವು ಕಷ್ಟಾನೇ. ಸೋಲಿನ ಬಗ್ಗೆ ಹೇಳೋ ಮೊದಲು ಕ್ಷೇತ್ರದ ಇತಿಹಾಸ ನೋಡೋಣ. ಕಾಂಗ್ರೆಸ್ ನ ಭದ್ರ ಕೋಟೆ ಎಂದೆ ಖ್ಯಾತಿ, ಇಂದಿರ ಗಾಂಧಿಗೆ ರಾಜಕೀಯ ಪುನಶ್ಚೇತನ ಕೊಟ್ಟ ಮಲೆನಾಡು ಮತ್ತು ಕರಾವಳಿಯ ಬೆಟ್ಟ ಗುಡ್ಡಗಳ ಸ್ವರ್ಗ.
ನಾನು ಚಿಕ್ಕವನಿದ್ದಾಗ ನೆನಪು. ಕಾಂಗ್ರೆಸ್ ಅಂದ್ರೆ ಕಣ್ಮುಚ್ಚಿ ವೋಟ್ ಹಾಕುತ್ತಿದ್ದ ಎರಡು ಕ್ಷೇತ್ರಗಳು ಕಾರ್ಕಳ ಮತ್ತು ಕುಂದಾಪುರ. ನಾನು ಎಂಟು ಕ್ಷೇತ್ರಗಳಿದ್ರು ಎರಡು ಕ್ಷೇತ್ರದ ಬಗ್ಗೆ ಯಾಕೆ ಬರಿತಿದಿನಿ ಅಂದ್ರೆ ನಮ್ಮ ಇಬ್ಬರು ನಾಯಕರ ರಾಜಕೀಯ ಜನ್ಮಭೂಮಿ ಅದು.

೨೦೦೪ ರ ಮೊದಲು ಬರೇ ಕಾಂಗ್ರೆಸ್ ಎಮ್ಮೆಲ್ಲೆಗಳನ್ನು ಎರಡು ದಶಕಗಳಿಂದ ನೋಡಿದ ಜನಕ್ಕೆ ಒಬ್ಬ ಒಳ್ಳೆ ಯುವ ನಾಯಕನ ಕೊರತೆ ಇತ್ತು. ಬಜರಂಗ ದಳದ ಸಕ್ರಿಯ ಕಾರ್ಯಕ್ರಮ, ಸುಚೇತ ಶೆಟ್ಟಿಯ ಕೊಲೆ ಪ್ರಕರಣದ ವಿರುದ್ದ ಹೋರಾಟಗಳ ಮೂಲಕ ಸುನಿಲ್ ಕುಮಾರ್ ಎಂಬ ಸಾಮಾನ್ಯಾ ಮನುಷ್ಯನನ್ನು (ರಾಜಕೀಯ ಹಿನ್ನೆಲೆ ಇಲ್ಲದ ) ನಾಯಕ ಪಟ್ಟಕ್ಕೆ ತಂದು ನಿಲ್ಲಿಸಿತು . ರಾಜಕೀಯವಾಗಿ ಕಾಂಗ್ರೆಸ್ ಗೆ ವಿರುದ್ದ ಕಾರ್ಕಳದಲ್ಲಿ ನಾಯಕರೇ ಇಲ್ಲ ಅನ್ನೋ ಸ್ಥಿತಿ, ಇದನ್ನು ಹುಸಿ ಮಾಡಿದೂ ಸುನಿಲ್ ಕುಮಾರವರ ಹೋರಾಟ ಅದಕ್ಕೆ ಸಾಕ್ಷಿ ೨೦೦೪ ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯನ್ನ ಸುಮಾರು ೧೦ ಸಾವಿರ ಮತಗಳ ಅಂತರದಲ್ಲಿ ಸುನಿಲ್ ಕುಮಾರ್ ಗೆದ್ದಿದ್ರು.

ಜನ ನಾಯಕನಾಗಿ ಹೊರಬಂದ ವ್ಯಕ್ತಿ ಅಧಿಕಾರ ಸಿಕ್ಕಾಗ "ಚೇಂಜ್ ಆಗಿದ್ದಾನೆ, ಮೊದಲಿನ ತರ ಇಲ್ಲ " ಅನ್ನೋ ಮಾತು ಕೇಳಿ ಬಂತು. ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿಲ್ಲ ಒಟ್ಟಿನಲ್ಲಿ ೨೦೦೮ ರ
ಸುನಿಲ್ ಸೋಲಿಗೆ ಅದೇ ಕಾರಣ ಆಗಿತ್ತು .

ಬ್ರಹ್ಮಾವರ ಕ್ಷೇತ್ರದ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಜೆ ಪಿ ಹೆಗಡೆಯವರು, ಜನ ಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ವ್ಯಕ್ತಿತ್ವವನ್ನು ಪಡೆದುಕೊಂಡಿದ್ರು ಎಂಬುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರ ವಿಂಗಡಣೆಯಿಂದ ಅವರ
ವಿಧಾನ ಸಭಾ ಕ್ಷೇತ್ರ ಉಡುಪಿ ಮತ್ತೆ ಕುಂದಾಪುರ ಪಾಲಾಯ್ತು .ಯಾವ ಪಕ್ಷ ಸೇರಬೇಕು ಎನ್ನೋ ಅವರ ಮನಸ್ಸು ಸಹಜವಾಗಿಯೇ ಕಾಂಗ್ರೆಸ್ಸನ(ಸೆಕ್ಯುಲರ್ ) ಕಡೆ ಹೋಗಿತ್ತು . ೨೦೦೮ ರ ಎಲೆಕ್ಷನಲ್ಲಿ ಕುಂದಾಪುರದಿಂದ ಟಿಕೆಟ್ ಕೊಟ್ರು ಸಹ, ಶ್ರೀನಿವಾಸ್ ಶೆಟ್ಟಿಯವರ ಜನಪ್ರಿಯತೆ ಮುಂದೆ ಸೋತರು. ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡರ ವಿರುದ್ದ ನಿಂತರೂ ವಿಜಯ ಲಕ್ಷ್ಮಿ ಒಲಿಯಲಿಲ್ಲ , ಕಾರಣ ಬಿಜೆಪಿ ಯಲ್ಲಿ ಇದ್ದ ಸಂಘಟನ ಶಕ್ತಿ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯ ಒಳ ಜಗಳ , ಸತತವಾಗಿ ಎರಡು ಬಾರಿ ಸೋತ ಜೆಪಿ ಅವರ ಮೇಲೆ ಜನರಿಗಿದ್ದ ಅನುಕಂಪ,
ಸುನಿಲ್ ಕುಮಾರ್ ಬಗ್ಗೆ ಇದ್ದ ಅಪಪ್ರಚಾರ, ಬಿಜೆಪಿಗೆ ನಿಜಯಾಗಿಯು " ಸ್ಲೋ ಪಾಯ್ಸನ್ " ಆಗಿತ್ತು. ಈ ಕಾರಣಗಳಿಂದಾಗಿ ಕಾಂಗ್ರೆಸ್ ಗೆ ಅನಾಯಾಸ ಗೆಲುವು ಸಿಕ್ಕಿದೆ ಎಂದರೆ ತಪ್ಪಾಗುತ್ತೆ. ಬಿಜೆಪಿ ತಾನಾಗಿಯೇ ಚುಚಿಕೊಂಡ ಸ್ಲೋ ಪಾಯ್ಸನ್ ಇಂಜೆಕ್ಷನ್. ಮನುಷ್ಯ ಎಷ್ಟೇ ಉನ್ನತ ಅಧಿಕಾರಕ್ಕೆ ಹೋದರೂ ತನ್ನನ್ನು ಗೆಲ್ಲಿಸಿದ ಜನಸಾಮಾನ್ಯರನ್ನು ಮರೀಬಾರ್ದು, ಜನಗಳ ನೋವು ನಲಿವುಗಳಿಗೆ ಸ್ಪಂದಿಸಬೇಕು. ಅನ್ನೋದನ್ನ ಸುನಿಲ್ ಕುಮಾರ್ ತಿಳ್ಕೊಂಡಿದ್ರೆ, ಬೇರೆ ಯಾರು ಅಪಪ್ರಚಾರ ಮಾಡೋಕೆ ಅವಕಾಶ ಇರ್ತಿರ್ಲಿಲ್ಲ.
ಇಷ್ಟೆಲ್ಲಾ ಇದ್ರೂ, ಕಾರ್ಕಳ ಕ್ಷೇತ್ರದ ವೋಟ್ ಶೇರಿಂಗ್ ನಲ್ಲಿ ಸುನಿಲ್ ಗೆ ಸುಮಾರು ಒಂದು ಸಾವಿರ ಲೀಡ್ ಕೊಟ್ಟಿದೆ. ಇನ್ನಾದ್ರು ಅವರು ಮೊದಲಿನ ಸುನಿಲ್ ಆಗಲಿ, ಮುಂದಿನ ಎಲೆಕ್ಷೆನ್ ನಲ್ಲಿ ಜನರು ಮತ್ತೊಮ್ಮೆ ಅವರನ್ನು ಗೆಲುವಿನ ಪಟ್ಟಕ್ಕೆ ಏರಿಸಲಿ ಅಂತ ಅವರ ಅಭಿಮಾನಿಯಾಗಿ ಆಶಿಸುತ್ತೇನೆ.
ಸದಾ ಜನರ ಜೊತೆ ಇದ್ರೆ , ಅವರ ಆಶೀರ್ವಾದ ಸಿಕ್ಕೆ ಸಿಗುತ್ತೆ ಅನ್ನೋದನ್ನ ಪ್ರೂವ್ ಮಾಡಿದ ಜೆಪಿ ಹೆಗಡೆ ಅವರಿಗೂ ಒಳ್ಳೆಯದಾಗಲಿ.
ಒಳ್ಳೆತನವನ್ನ ಪಕ್ಷಾತಿತ ವಾಗಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ.