Thursday, April 12, 2012

ಭೀಮ ತೀರದಲ್ಲಿ ಮುಳುಗಿದ .............

ಹಾವಿಗೆ ಹಲ್ಲಲಿ ಮಾತ್ರ ವಿಷ ಅಂತೆ, ಆದರೆ ಕೆಲವರಿಗೆ ಮೈಯಲ್ಲ ವಿಷ , ಅದು ನಿಜ ಅನಿಸಿದ್ದು ಭೀಮ ತೀರದಲ್ಲಿ ಸಿನಿಮಾದ ಸುತ್ತ ನಡೆದ ವಿವಾದದಿಂದ, ಬರೀ ತನ್ನ ಪತ್ರಿಕೆಯಲ್ಲಿ ಬರಿಯೋದೆ ಸತ್ಯ, ನಾನು ಬಳಸೋ ಶಬ್ದಗಳು , ವಾಕ್ಯಗಳು, ಪಂಪ, ರನ್ನರಿಗೆ ಏನು ಕಮ್ಮಿ ಇಲ್ಲ, ನಾನು ಒಂದು ಸಲ ಲೇಖನ ಬರೆದರೆ ಅದೇ ಕೋರ್ಟ್ ತೀರ್ಮಾನ ಅನ್ನೋ ರೀತಿ, ಗೀಚಿ ಗೀಚಿ ಎಷ್ಟೋ ಹೆಣ್ಣು ಮಕ್ಕಳ , ಸಂಸಾರಗಳ ಮಾನ ಮರ್ಯಾದೆ ಜೊತೆ ಚೆಲ್ಲಾಟ ಆಡಿ , ಅದನ್ನೇ ತನ್ನ ಬಂಡವಾಳ ಮಾಡಿ ,ಕೋಟಿ ಕೋಟಿ ಆಸ್ತಿ , ಕಿರ್ತೀ ಸಂಪಾದಿಸಿದ ಇವರನ್ನ ನೋಡಿದಾಗ, ಸತ್ಯ ಬಯಲಾದಾಗ.

ವಿವಾದ ಶುರು ಆಗಿದ್ದು ನಿರ್ಮಾಪಕರಿಗೆ ಬಂದ ಬೆದರಿಕೆ ಕಾಲ್ ನಿಂದ, ಅವಾಗ ಫೀಲ್ಡ್ ಗೆ ಎಂಟ್ರಿ ಕೊಟ್ಟ ಇವರ ಮಾತೂ indirect ಆಗಿ ಬೆದರಿಸುವ ತಂತ್ರ ಅನ್ನೋ ಹಾಗೇ ಇತ್ತು , ನಿರ್ಮಾಪಕರಿಗೆ, ನೀವು ೪೦ ಲಕ್ಷ ಕೊಡಿ, ಚಂದಪ್ಪ ಫ್ಯಾಮಿಲಿಗೆ hurt ಆಗಿದೆ , ಅವರ ಫ್ಯಾಮಿಲಿ ಮಕ್ಕಳ ದತ್ತು ತಗೊತೀನಿ ಅಂತ ಜನರ ಮುಂದೆ ಪ್ರಮಾಣ ಮಾಡಿ ಅಂತ ಲೈವ್ ಪ್ರೋಗ್ರಮಲ್ಲಿ ಹೀಗೆ ಒಬ್ಬರ ಮೇಲೆ ಒತ್ತಡ ತರೋ ಮೂಲಕ ತನ್ನ ಮನದಾಳದ ವಿಷ ವನ್ನು ಕಕ್ಕಿದು ಇದೆ ಮಹಾಸ್ವಾಮಿ, ಯಾವಾಗ ವಿವಾದ ಜಾಸ್ತಿ ಆಯಿತು ನೋಡಿ ಕೂಡಲೇ ತನ್ನ ವರಸೆ ಬದಲಿಸಿ ತನ್ನ ಕಥೆ ಇದು , ಭೀಮ ತೀರದ ಹಂತಕರನ್ನ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟವ ನಾನು ,ಅದರಲ್ಲಿ PHD ಮಾಡಿದೀನಿ ಅಂದ್ರು ,ಅವರೂ ಏನ್ ಮಹಾನ್ ಕೆಲಸ ಮಾಡಿದರು ಸ್ವಾಮಿ ಅದರಿಂದ ದೇಶಕ್ಕೇನು ಲಾಭ? ಸಮಾಜಕ್ಕೆ ಏನು ಲಾಭ? , ಅವರನ್ನ ಪ್ರಪಂಚಕ್ಕೆ ಪರಿಚಯ ಮಾಡಿ ಕೊಟಿದಕ್ಕೆ ಇವರಿಗೆ ನೋಬೆಲ್ ಪ್ರಶಸ್ತಿ ಕೊಡೋಣ ಬಿಡಿ.

ಕಥೆ ಕಾಲ್ಪನಿಕ ಆಗಿದ್ದರೆ , ತನ್ನ ಸ್ವಂತ ಬುದ್ಧಿಯಿಂದ ಕಥೆಯನ್ನ ಬರೆದು ಪಾತ್ರಗಳ ಸೃಷ್ಟಿ ಮಾಡಿದ್ದರೆ , ಅಂತ ಕಥೆಯನ್ನ ಸಿನಿಮಾ ಮಾಡಿದ್ದರೆ ಅದನ್ನು ಕೇಳೋದು ನ್ಯಾಯಾ . ಇದು newton ಗ್ರಾವಿಟಿ ಕಂಡು ಹಿಡಿದ ಮೇಲೆ ಎಲ್ಲರೂ ನನ್ನ ಪೆರ್ಮಿಶನ್ ತಗೊಂಡು ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ತಿನ್ನಿ ಅಂದ ಹಾಗಾಯಿತು, ಅವರು ಹಾಗೆ ಹೇಳಿದ್ದರೆ ಜನ ಕೇಳ್ತಾ ಇದ್ರೂ ಏನೋ, ಆದರೆ ಅವರು ಹಾಗೆ ಹೇಳಲಿಲ್ಲ ತುಂಬಿದ ಕೊಳ ಯಾವತ್ತು ತುಳುಕೊಲ್ಲ ನೋಡಿ ಅದಕ್ಕೆ , ಇವರ ವಾದ ಮಾತ್ರ ಮೂರ್ಖತನದ ಪರಮಾವದಿ.

ಇನ್ನೋಬರ ಬಗ್ಗೆ ಏನಾದರೂ ಹೇಳಬೇಕಾದರೆ , ತನ್ನ ಬಗ್ಗೆ ತಾನು ನೋಡ್ಬೇಕು, ಎಸ್ಟೋ ಹೆಣ್ಣು ಮಕ್ಕಳ ಬಗ್ಗೆ , ಸಿನಿಮಾ ನಟ ನಟಿಯರ ಬಗ್ಗೆ ,ಅವರ ಬಗ್ಗೆ ಮಸಾಲ ಮಿಕ್ಸ್ ಮಾಡಿ ಬರೆದೂ , ಶಬಾಸ್ ಅನ್ಸಿಕೊಂಡವರೂ, ಟಿವಿ interview ಒಂದರಲ್ಲಿ ತನಗೆ ಎರಡು ಹೆಂಡತೀ ಅಂತ ಹೆಮ್ಮೆಯಿಂದ ಹೇಳ್ತಾರೆ ಅಂದ್ರೇ, ಇವರಂಥ ಬಂಡ ಯಾರೂ ಇಲ್ಲ ಅಂದ್ರೇ ತಪ್ಪಲ. ಓ ಮನಸೇ ಅನ್ನೋ ತನ್ನದೇ ಪತ್ರಿಕೆಯಲ್ಲಿ ಹೆಣ್ಮಕ್ಕಳಿಗೆ respect ಕೊಡೋದೇನೂ, ಅಣ್ಣ ಅನಿಸಿಕೊಳೋದೇನೂ ಯಾಕೆ ಈ ಮೊಸಳೆ ಕಣ್ಣೀರು ಗುರುಗಳೇ.

ಬರೀ ಪತ್ರಿಕೆ ಸೇಲ್ ಮಾಡಿ ಸುಮರೂ ೨೫೦ ಕೋಟಿ ಆಸ್ತಿ ಮಾಡಿದರೆ ಅಂದ್ರೇ, ಪತ್ರಿಕೋದ್ಯಮ ಯಾವ ಸಾಫ್ಟ್ವೇರ್ ಉದ್ಯಮಕ್ಕೂ ಕಡಿಮೆ ಇಲ್ಲ ಬಿಡಿ, ಇವರನ್ನ ಐಐಎಂ ಅಲ್ಲಿ ಬುಸ್ಸಿನೆಸ್ಸ್ ಲೆಕ್ಚರಿಂಗ್ ಕಳಿಸಿದರೆ ಎಲ್ಲ ಉದ್ಯಮ ಕ್ಲಿಕ್ ಆಗಬಹುದು.
ಕಾಲವೇ ಎಲ್ಲದಕ್ಕೆ ಉತ್ತರ ಕೊಡುತ್ತೆ ಅನ್ನೋದು ನಿಜ . ಎಷ್ಟೂ ದಿನಗಳ ಆ ಸತ್ಯ ಇವತ್ತು ಬಯಲಾಗಿದೆ, ಅದೂ ತಾನಾಗಿ ತೋಡಿಕೊಂಡ ಹೊಂಡಕ್ಕೆ ತಾನೆ ಬಿದ್ದಾಗ, ತಾನೆ ಕಟ್ಟಿಕೊಂಡ ಸಾಮ್ರಾಜ್ಯ ಭೀಮ ತೀರದಲ್ಲಿ ಮುಳುಗಿದಾಗ.

ಇನ್ನಾದರೂ ಇಂತ ಬುಸ್ಸಿನೆಸ್ ಪತ್ರಿಕೆಗಳಿಗೆ , ಬ್ಲಾಕ್ ಮೇಲ್ ಮಾಡಿ ಬೇರೆಯವರ ಜೀವನ ನಾಶ ಮಾಡೋರಿಗೆ , ಜನ ಚಪ್ಪಲಿ ಸೇವೆ ಮೂಲಕ ಉತ್ತರ ಕೊಡಲಿ.

ಕೊಡ್ತಾರ? ಕಾಲವೇ ಉತ್ತರ ಹೇಳ್ಬೇಕು .......

2 comments:

  1. He is arrogance personified.He was solely responsible for Chandappa's death.To cover that huge betrayal and guilt he is taking care of his family.He was quite stupid in asking Producers to take care of the family.He will never enter Bheema
    as his true colours are out from his Black and White tabloid.They day he enters Bheema both his wives will be widows

    ReplyDelete
  2. Ravi belegere yaavathu tanna swantha buddhi inda mele banadavanalla. Aaa talent kooda aathanigilla. Avanige gothirodu black mail maadodu, mosa maadodu, are bare ashleela saathithya aste....

    ReplyDelete